ನಾನು ಮಲೆನಾಡ ಹುಡುಗಿ, ಕಂಡ ಕನಸುಗಳನ್ನು ನನಸಿನ ರೂಪದಲ್ಲಿ ನೋಡುವುದಕ್ಕಾಗಿ ಬೆಂಗಳೂರಿಗೆ ಬಂದಿದ್ದೇನೆ. ನಾನು ಬಯಸಿದ ಕ್ಷೇತ್ರ ತಕ್ಷಣ ಸಿಗದಿದ್ದರೂ, ಅದು ಸಿಗಲು ತಡವೂ ಆಗಿಲ್ಲ.. ಕನಸುಕಂಡ ಕ್ಷೇತ್ರದಲ್ಲಿಯೇ ಕೆಲಸ ಮಾಡುವುದು ಖುಷಿಯ ಸಂಗತಿಯೂ ಹೌದು. ಹೆಚ್ಚು ಖುಷಿಯಾಗಿರಲು ಯಾವಾಗಲೂ ಪ್ರಯತ್ನಿಸಲೇ ಇರುವ ಸಹೃದಯಿ ನಾನು. ಭಾವನೆಗಳೇ ನನ್ನ ಸ್ನೇಹಿತರು. ಸಧ್ಯಕ್ಕೆ ಮತ್ತಷ್ಟು ಕನಸು ಹಾಗೂ ಸ್ವಲ್ಪ ನನಸಿನೊಂದಿಗೆ ನನ್ನ ಪುಟ್ಟ ಪ್ರಪಂಚದಲ್ಲಿ ಖುಷಿಯಾಗಿದ್ದೀನಿ.